ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗಳು, ಕರ್ನಾಟಕದ ಭವಿಷ್ಯ ನಿರ್ಮಾಣಕ್ಕೆ ಒಂದು ಮಹತ್ವದ ಘಟನೆಯಾಗಿದ್ದು, ಉತ್ತಮ, ಕ್ರಿಯಾಶೀಲ ಉಮೇದುವಾರರನ್ನು ಆರಿಸಿ ಗೆಲ್ಲಿಸಲು ಮತದಾರರಿಗೆ ಒಂದು ಸುವರ್ಣ ಅವಕಾಶವಾಗಿದೆ. ನಿಮ್ಮ ಮಾಹಿತಿಗಾಗಿ ಕನ್ನಡ.ಕಾಮ್, ‘ನಮ್ಮ ರಾಜ್ಯ, ನಮ್ಮ ಮತ, ನಮ್ಮ ಭವಿಷ್ಯ’ ಯೋಜನೆಯ ಮೂಲಕ, ಕರ್ನಾಟಕದ ಪ್ರಮುಖ ಕ್ಷೇತ್ರಗಳ ಉಮೇದುವಾರರ ಮತ್ತು ಅವರ ಕಾರ್ಯಗಳ ವ್ಯಾಪಕ ಪರಿಚಯ ನೀಡಲಿದೆ. ಇದರಿಂದ ನಿಮಗೆ ನಿಮ್ಮ ಕ್ಷೇತ್ರದ ವಿವಿಧ ಉಮೇದುವಾರರ ಸಂಪೂರ್ಣ ತುಲನೆ ಮಾಡಲು ಹಾಗೂ ನಿಮ್ಮ ಮತ ಯಾರಿಗೆ ನೀಡಬೇಕೆಂದು ನಿರ್ಧರಿಸಲು ಅನುಕೂಲವಾಗುತ್ತದೆ.